ನಾವು ಡಾ।।ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು

  • Home
  • India
  • Bangalore
  • ನಾವು ಡಾ।।ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು

ನಾವು ಡಾ।।ಬಿ.ಆರ್.ಅಂಬೇಡ್ಕರ್  ಅಭಿಮಾನಿಗಳು ಅಂಬೇಡ್ಕರ್

ಹೈದರಾಬಾದ್ ನಲ್ಲಿ ಸುಮಾರು 146.5 ಕೋಟಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ (125 ಅಡಿ) ಬಾಬಾಸಾಹೇಬ್ ಅಂಬೇಡ್ಕರರ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳ...
07/04/2023

ಹೈದರಾಬಾದ್ ನಲ್ಲಿ ಸುಮಾರು 146.5 ಕೋಟಿ ವೆಚ್ಚದಲ್ಲಿ ವಿಶ್ವದ ಅತಿ ಎತ್ತರದ (125 ಅಡಿ) ಬಾಬಾಸಾಹೇಬ್ ಅಂಬೇಡ್ಕರರ ಕಂಚಿನ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಉದ್ಘಾಟನೆ ಇದೇ 14 ಅಂಬೇಡ್ಕರ್ ಜಯಂತಿ ದಿನದಂದು ನಡೆಯಲಿದೆ. ಅಂದಹಾಗೆ ಈಗಾಗಲೇ ಸಾಕಷ್ಟು ಕುತೂಹಲ , ನಿರೀಕ್ಷೆ ಹುಟ್ಟಿಸಿರುವ ಈ ಪ್ರತಿಮೆಯ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರರ ಅನುಯಾಯಿಗಳ ಪಾಲಿನ ಪುಣ್ಯ ಸ್ಥಳ ಆಗಲಿದೆ ಎಂದೇ ಸಾರ್ವಜನಿಕ ವಲಯದಲ್ಲಿ ಪ್ರಚಾರ ಪಡೆಯುತ್ತಿದೆ. #ಜೈಭೀಮ್ #ಸಂವಿಧಾನಶಿಲ್ಪಿ #ಭಾರತರತ್ನ

09/03/2023

ಹುಲ್ಲೇರಹಳ್ಳಿ ಭಹಿಷ್ಕಾರ ಪ್ರಕರಣ
ಶೋಬಮ್ಮ

ದುಡ್ಡು ತೆಗೆದುಕೊಳ್ಳದೆ ನಮಗೆ ನ್ಯಾಯ ಕೊಡಿಸಿದ್ದು ಸಂದೇಶ
ದಯವಿಟ್ಟು ಈ ವಿಡಿಯೊ ಅನ್ನು ಹಂಚಿಕೊಳ್ಳಿ ಈ ಸತ್ಯ ಎಲ್ಲರಿಗೂ ತಿಳಿಯಲಿ ನಾವು ಡಾ।।ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು

07/03/2023

Join Instagram! Sign up to see photos, videos, stories & messages from your friends, family & interests around the world.

ನನ್ನ ಪ್ರೀತಿಯ ಎಲ್ಲ  ಹಿರಿಯ ಹೋರಾಟಗಾರರಿಗೆ ಮತ್ತು ಭೀಮ ಬಂಧುಗಳಿಗೆ  ಒಂದು ಮನವಿ🙏🙏🙏🙏🙏🙏🙏🙏🙏ಯುವ ಹೋರಾಟಗಾರ ಸಹೋದರ ಸಂದೇಶ್ ನ ಇಂದಿನ ಈ ಸ್ಥಿತಿಗ...
07/03/2023

ನನ್ನ ಪ್ರೀತಿಯ ಎಲ್ಲ ಹಿರಿಯ ಹೋರಾಟಗಾರರಿಗೆ ಮತ್ತು ಭೀಮ ಬಂಧುಗಳಿಗೆ ಒಂದು ಮನವಿ🙏🙏🙏🙏🙏🙏🙏🙏🙏

ಯುವ ಹೋರಾಟಗಾರ ಸಹೋದರ ಸಂದೇಶ್ ನ ಇಂದಿನ ಈ ಸ್ಥಿತಿಗೆ ಬಹಳ ನೋವಾಗಿದೆ ಒಬ್ಬ ದಲಿತ ಯುವಕನ ಗಟ್ಟಿಯಾಗಿ ನೆಲೆಯೂರಿ ಯುವಕರಲ್ಲಿ ಹೋರಾಟದ ಉತ್ಸಾಹವನ್ನು ತುಂಬಿ ಭವಿಷ್ಯದ ಒಬ್ಬ ನಾಯಕನಾಗುವ ಎಲ್ಲ ಸಾಧ್ಯೆಗಳೂ ಇದ್ದು ಬೆಳೆಯುವ ಯುವಕರಿಗೆ ಸಾಧ್ಯವಾದರೆ ಬೆಂಬಲಿಸಿ ಬೆಳೆಸಬೇಕಾದ ಹಿರಿಯ ದಲಿತ ನಾಯಕರ ಮೌನ ಅವರ ಮನಸ್ಥಿತಿ ಯಾವ ಮನುವಾದಿಗು ಕಮ್ಮಿ ಇಲ್ಲ ಇಂಥ ಯುವಕರು ಬೆಳೆದರೆ ಸಮುದಾಯ ಬೆಳೆದಂತೆ ಅಲ್ಲವಾ ನಡೆಯೋ ಕಾಲೇ ಎಡವೋದು ಹೋರಾಟದ ಉತ್ಸಾಹದಲ್ಲಿ ಸಣ್ಣ ಪುಟ್ಟ ಲೋಪವಾಗಿರಬಹುದು ಬಾಬಾ ಸಾಹೇಬರ ಬಗ್ಗೆ ಘಂಟೆ ಗಟ್ಟಲೆ ಮಾತನಾಡುವ ಎಲ್ಲರಿಗೂ ಈ ವಿಚಾರದಲ್ಲಿ ಒಂದು ಬದ್ಧತೆ ಜವಾಬ್ದಾರಿ ಇಲ್ಲವೇ? ನಮ್ಮ ಮುಂದಿನ ಪೀಳಿಗೆಯನ್ನು ನಾವು ಕಾಪಾಡಿಕೊಂಡು ಉತ್ಸಾಹ ತುಂಬದೆ ಅವರು ಬಿದ್ದಾಗ ಮೌನ ವಹಿಸಿದರೆ ಎಲ್ಲೋ ಒಂದು ಕಡೆ ಯುವ ಪೀಳಿಗೆಯ ಹಾಗೂ ಸಮುದಾಯದ ಬಗ್ಗೆ ನಿಮಗೆ ಕಾಳಜಿ ಇಲ್ಲ ಎಂದು ಅರ್ಥವೇ? ಯಾರೇ ಹೀಗೆ ತೊಂದರೆಯಲ್ಲಿ ಸಿಕ್ಕಿಕೊಂಡಾಗ ಕನಿಷ್ಠ ಮಾನವೀಯತೆಯನ್ನು ನಾವು ತೋರಿಸಲ್ಲ ಎಂದರೆ ನಿಜವಾಗಿಯೂ ಇದು ಒಂದು ಮನುವಾದಿ ಮಾನಸಿಕತೆ ನಮ್ಮ ಮಕ್ಕಳು ಸಂದೇಶ್ ರವರು ಆ ಜಾಗದಲ್ಲಿ ಹೀಗೆ ನೋವು ತಿನ್ನುತ್ತಿದ್ದರೆ ನೀವುಗಳು ಹೀಗೆ ಸುಮ್ಮನೆ ತಮಾಷೆ ನೋಡ್ತಾ ಕೂತಿದ್ದರೆ ಇದೇನಾ ಹಿರಿತನ ಇದೇನಾ ಅಂಬೇಡ್ಕರ್ ವಾದಿಗಳ ಪ್ರಧುದ್ಧತೆ ಸಂದೇಶ್ ಇಂದು ಆಸ್ಪತ್ರೆಯಲ್ಲಿ ಮಲಗಿರುವುದು ನಾನು ಯಾವ ಸಮುದಾಯದ ಹೆಣ್ಣು ಮಕ್ಕಳ್ಳಿಗಾದ ಅನ್ಯಾದ ವಿರುದ್ಧ ಹೋರಾಟ ಮಾಡಿದೆನೋ ಅ ಸಮುದಾಯದ ನನ್ನನು ಒಂಟಿ ಮಾಡಿದೆ ಎಂಬ ನೋವಿನಿಂದ ಒಬ್ಬ ತಾಯಿಯಾಗಿ ನನಗೆ ಅ ಹುಡುಗನ ಸಂಕಟದ ಅರಿವಿದೆ ಕನಿಷ್ಟ ಒಂದು ಸೌಜನ್ಯಕ್ಕಾದರೂ ಇತರರಿಗೆ ನಾವು ಒಂದಾಗಿದ್ದೇವೆ ಒಂದು ಹೇಳಲಿಕ್ಕಾದರು ಸಂದೇಶ್ ಗೆ ಧೈರ್ಯ ತುಂಬಿ ನಾನಂತೂ ಇಂಥ ಎಲ್ಲ ಯುವಕ ಯುವತಿಯರ ಜೊತೆ ಸದಾ ಒಂದು ಬೆಂಬಲವಾಗಿ ಇರುತ್ತೇನೆ ಅದು ನನ್ನ ಕರ್ತವ್ಯ ಕೂಡ ಎಲ್ಲೋ ಉತ್ತರ ಭಾರತದಲ್ಲಿ ಒಂದು ಅಟ್ರಾಸಿಟಿ ಆದರೆ ಇಲ್ಲಿ ಹೋರಾಟ ಮಾಡೋ ನಾವು ಹತ್ತಿರದ ಕೋಲಾರದಲ್ಲಿ ಒಬ್ಬ ಉತ್ಸಾಹಿ ಯುವ ಹೋರಾಟಗಾರನ ಬದುಕನ್ನ ತುಳಿಯುತ್ತಿರುವಾಗ ಹೇಗೆ ಮೌನವಾಗಿದೀರಿ???ಯಾಕೆ ಮೌನ ವಾಗಿದೀರಿ??? ಬೆಳೆಯುವ ಭರದಲ್ಲಿ ನೀವ್ಯಾರು ತಪ್ಪು ಹೆಜ್ಜೆ ಇಡಲೆ ಇಲ್ಲವೇ??? ಯೋಚಿಸಿ ನಾವು ಹೀಗೆ ಒಬ್ಬಬರನ್ನೆ ಬಲಿಕೊಡುತ್ತ ಹೋದರೆ ಸಮುದಾಯದ ಏಳಿಗೆ ಸಾಧ್ಯವೇ? ಮುಂದಿನ ಪೀಳಿಗೆ ಇಂಥ ಉದಾಹರಣೆಗಳಿಂದ ಭಯಪಟ್ಟು ತಟಸ್ಥವಾಗುವುದಿಲ್ಲವೆ ? ನಿಮ್ಮ ನಂತರ ನಿಮ್ಮ ಮುಂದಿನ ಪೀಳಿಗೆ ಕೆಚ್ಚೆದೆಯಿಂದ ಅನ್ಯಾಯ ಅಸಮಾನತೆಯನ್ನು ಪ್ರಶ್ನಿಸುವುದುಬೇಡವೆ? ನನ್ನ ಪ್ರಶ್ನೆ ನನ್ನ ಎಲ್ಲ ಹಿರಿಯ ಹಾಗೂ ಹೆಸರಾಂತ ಹೋರಾಟಗಾರಿಗೆ...ಸಂದೇಶ್ ನಿನ್ನ ಜೊತೆ ನಿನ್ನ ತಾಯಿಯಾಗಿ ನಾನಿದ್ದೇನೆ ನನ್ನಂಥ ಇನ್ನಷ್ಟು ಜನ ಸಮಾಜದ ಬಗ್ಗೆ ಕಾಳಜಿ ಇರುವ ಒಡನಾಡಿಗಳು ಇದ್ದಾರೆ ಹೆದರಬೇಡ ಚೇತರಿಸಿಕೊಂಡು ಮುನ್ನುಗ್ಗು ನಾವಿದ್ದೇವೆ ನಮ್ಮ ಸಂಪೂರ್ಣ ಸಮುದಾಯ ಇದೆ ತಡವಾದರೂ ಸರಿ ನಮ್ಮೆಲ್ಲ ಹಿರಿಯ ಹೋರಾಟದ ಹುಲಿಗಳು ಸಹ ಬೆಂಬಲಿಸುತ್ತಾರೆ ಅನ್ನೋ ನಂಬಿಕೆ ನನಗಿದೆ. 👍 ಯುವ ಶಕ್ತಿ ಗೆಲ್ಲಲ್ಲಿ ಭಾರತದ ಭವಿಷ್ಯ ನಮ್ಮ ಯುವ ಪಡೆ ನೀವು ಗೆಲ್ಲಬೇಕು
ಜೈ ಭೀಮ್ ನಾವು ಡಾ।।ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು

ಇದಲ್ವಾ ಅಂಬೇಡ್ಕರ್ ಅವರ ಕನಸು. 👌✌️🔥ಯಾರನ್ನು ಅಂದು ಶಾಲೆಯೊಳಗೆ, ಗುಡಿಯೊಳಗೆ, ಗ್ರಾಮದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಶೋಷಣೆ ಮಾಡ್ತ...
17/01/2023

ಇದಲ್ವಾ ಅಂಬೇಡ್ಕರ್ ಅವರ ಕನಸು. 👌✌️🔥

ಯಾರನ್ನು ಅಂದು ಶಾಲೆಯೊಳಗೆ, ಗುಡಿಯೊಳಗೆ, ಗ್ರಾಮದೊಳಗೆ ಪ್ರವೇಶಿಸದಂತೆ ನಿರ್ಬಂಧ ಹೇರುವ ಮೂಲಕ ಶೋಷಣೆ ಮಾಡ್ತಿದ್ರೋ,
ಅವರಿಗಾಗಿ ಅವರ ಉಜ್ವಲ ಭವಿಷ್ಯಕ್ಕಾಗಿ ಸಮಾನತೆಗಾಗಿ ಹತ್ತಾರು ದೇಶ ಸುತ್ತಿ ನೂರಾರು ಪುಸ್ತಕ ಓದಿ ಬಲಿಷ್ಠ ಸಂವಿಧಾನ ಕೊಟ್ಟರು ಅಂಬೇಡ್ಕರ್.
ಜೊತೆಗೆ ಶಿಕ್ಷಣದ ಮಹತ್ವ ಸಾರುವ ಮೂಲಕ ಅನ್ಯಾಯದ ವಿರುದ್ಧ ಹೋರಾಡಲು ಶೋಷಿತರಿಗೆ ಅವರು ಕೊಟ್ಟ ಆಯುಧ ಚಾಕು, ಖಡ್ಗ, ಕತ್ತಿ ಅಲ್ಲಾ ಬದಲಾಗಿ ಶಿಕ್ಷಣವನ್ನೇ ಆಯುಧ ಎಂದರು.✊️

ಆ ಆಯುಧ ಬಳಸಿಕೊಂಡು ಶಾಸನಗಳನ್ನು ರೂಪಿಸುವ ಜಾಗದಲ್ಲಿ ಶೋಷಿತರ ಮಕ್ಕಳು ಹೋಗಬೇಕೆಂದು ಬಾಬಾಸಾಹೇಬರು ಕನಸು ಕಂಡಿದ್ದರು.

ಇಂದು ಅದೇ ಆಯುಧ ಬಳಸಿಕೊಂಡು 25ನೇ ವಯಸ್ಸಿನಲ್ಲೇ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ.
ಸಾಮಾಜಿಕ ನ್ಯಾಯದ ರಥವನ್ನು ಹೀಗೂ ಎಳೆಯಬಹುದೆಂದು ತೋರಿಸಿಕೊಟ್ಟು ಕೋಲಾರ
ಹೈ ಕೋರ್ಟ್ನ ಸಿವಿಲ್ ನ್ಯಾಯಾಧೀಶರಾಗಿರುವ
ದಲಿತ ಯುವತಿ ಗಾಯತ್ರಿ ಅವರಿಗೆ ಅಭಿನಂದನೆಗಳು..🙏

#ಜೈಭೀಮ್

ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದಾಗಿದ್ದು ಏಕೆ?ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂ...
31/12/2022

ಭೀಮಾ ಕೋರೆಗಾಂವ್ ಯುದ್ಧ ದಲಿತರ ಪಾಲಿಗೆ ಅತ್ಯಂತ ಮಹತ್ವದಾಗಿದ್ದು ಏಕೆ?
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಪೇಶ್ವೆಗಳ ನಡುವೆ ಭೀಮಾ ಕೋರೆಗಾಂವ್ ನಲ್ಲಿ ಜನವರಿ 1, 1818ರಲ್ಲಿ ಐತಿಹಾಸಿಕ ಯುದ್ದ ನಡೆಯಿತು. ಈ ವೇಳೆ ಐನೂರು ಮಂದಿ ದಲಿತ ಹೋರಾಟಗಾರರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ಇಪ್ಪತ್ತೆಂಟು ಸಾವಿರ ಮಂದಿ ಇದ್ದ ಸೈನ್ಯದ ವಿರುದ್ಧ ನಿರಂತರ ಹನ್ನೆರಡು ಗಂಟೆ ಕಾದಾಡಿದ ಸ್ಮರಣೀಯ ಕದನ ಅದು.

ಪೇಶ್ವೆಗಳ ಇಪ್ಪತ್ತೆಂಟು ಸಾವಿರ ಸೈನ್ಯ ಬಲವನ್ನು ಸೋಲಿಸಿದರು. ಕೋರೆಗಾಂವ್ ಸ್ಮಾರಕದಲ್ಲಿ ಆ ಇಪ್ಪತ್ತೆರಡು ಮಹರ್ ಸೈನಿಕರ ಚಿತ್ರಗಳು ದೇಶ ಸ್ವಾತಂತ್ರ್ಯ ಪಡೆಯುವವರೆಗೂ ಇತ್ತು. ಮಹರ್ ಸೈನಿಕರ ವೀರಗಾಥೆ ಹೇಳುವ ಸ್ಮಾರಕ ಅದು.

ಪೇಶ್ವೆಗಳದು ಬ್ರಾಹ್ಮಣರ ಸೈನಿಕರೇ ಹೆಚ್ಚಿದ್ದ ಇಪ್ಪತ್ತೆಂಟು ಸಾವಿರ ಸಂಖ್ಯೆಯ ಸೈನ್ಯ. ಐನೂರು ಮಂದಿಯಿದ್ದ 'ಅಸ್ಪೃಶ್ಯ' ಸೈನಿಕರಿಗೆ ಅವರ ಮುಂದೆ ನಿಲ್ಲಲಾದರೂ ಸಾಧ್ಯವೇ ಎಂದು ಪ್ರಶ್ನೆ ಮೂಡಿಸುವಂಥ ಸನ್ನಿವೇಶ. ಶಿರೂರಿನಿಂದ ಇಪ್ಪತ್ತೇಳು ಮೈಲು ಭೀಮಾ ಕೋರೆಗಾಂವ್ ನವರೆಗೆ ನಡೆದುಕೊಂಡೇ ಬಂದ ಮಹರ್ ಸೈನಿಕರಿಗೆ ಆಹಾರ, ನೀರು ಕೂಡ ಇರಲಿಲ್ಲ. ಆದರೂ ಹನ್ನೆರಡು ಗಂಟೆಗಳ ಕಾಲ ಆ ಸೈನಿಕರು ರಣಭೂಮಿಯಲ್ಲಿ ಕಾದಾಡಿದರು. ಆ ಯುದ್ಧದಲ್ಲಿ ಪೇಶ್ವೆಗಳು ಬರೀ ಸೋತಿದ್ದಲ್ಲ. ಮಹಾರಾಷ್ಟ್ರದಲ್ಲಿ ಪೇಶ್ವಾಗಳ ಉತ್ತರಾದಾಯಿತ್ವವೇ ಅಂತ್ಯವಾಯಿತು. ಹಲವು ಕಾರಣಗಳಿಗಾಗಿ ಈ ಯುದ್ಧಕ್ಕೆ ಮಹತ್ವ ಇದೆ.

ಅತ್ಯಂತ ಕಡಿಮೆ ಸಂಖ್ಯೆಯ ಸೈನಿಕರೊಂದಿಗೆ ಯುದ್ಧಕ್ಕೆ ಇಳಿದ ಬ್ರಿಟಿಷರಿಗೆ ಗೆಲ್ಲುವ ನಂಬಿಕೆ ಇರಲಿಲ್ಲ. ಆದರೆ ಈ ಯುದ್ಧವೇ ಪೇಶ್ವೆಗಳ ಆಡಳಿತದ ಅಂತ್ಯಕ್ಕೆ ಕಾರಣವಾಯಿತು. ಮಹಾರಾಷ್ಟ್ರದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ಬೇರುಗಳನ್ನು ಅಲುಗಾಡಿಸಲು ನೆರವಾದ ಸಂದರ್ಭ ಅದು.

ಐನೂರು ಸೈನಿಕರ ನೇತೃತ್ವ ವಹಿಸಿದ್ದು ಸಿದ್ಧಾಂಕ್ ಮಹರ್. "ಬ್ರಿಟಿಷರು ವಿದೇಶೀಯರು. ನಿಮಗೆ ನಾವು ನೆರವು ನೀಡುತ್ತೇವೆ" ಎಂದು ಆತ ಮನವಿ ಮಾಡುತ್ತಾರೆ. ಆದರೆ ಆತನ ಮನವಿಯನ್ನು ನಿರಾಕರಿಸಿದ ಪೇಶ್ವೆಗಳು, ಆ ಸೈನಿಕರನ್ನು ಅವಹೇಳನ ಮಾಡುತ್ತಾರೆ. ಹೀಯಾಳಿಸುತ್ತಾರೆ. ನಿಮಗೆ ಯಾವುದೇ ಹಕ್ಕು ಸಿಗಲ್ಲ. ನಮ್ಮ ವಿರುದ್ಧ ಕಾದಾಡಿದರೂ ಅಷ್ಟೇ, ಬ್ರಿಟಿಷರ ವಿರುದ್ಧ ಹೋರಾಡಿದರೂ ಅಷ್ಟೇ ಎನ್ನುತ್ತಾರೆ. ಆಗ ಯುದ್ಧ ಆರಂಭವಾಗುವುದು ಮಹರ್ ಸೈನಿಕರ ಆತ್ಮಗೌರವ ಹಾಗೂ ಹಕ್ಕುಗಳಿಗಾಗಿ. ಅಷ್ಟು ದೊಡ್ಡ ಸಂಖ್ಯೆಯ ಪೇಶ್ವೆ ಪಡೆ ಮಹರ್ ಸೈನಿಕರ ಎದುರು ಮಂಡಿಯೂರುತ್ತದೆ. ಬ್ರಿಟಿಷರಿಗೆ ಮಹತ್ವದ ವಿಜಯ ಲಭಿಸುತ್ತದೆ. ಆ ಮಹರ್ ಸೈನಿಕರಿಗೆ ಬ್ರಿಟಿಷರು ಗೌರವ- ಸಮ್ಮಾನ ನೀಡುತ್ತಾರೆ. ಮಹರ್ ರೆಜಿಮೆಂಟ್ ಮತ್ತು ಬಾಂಬೆ ಸೈನ್ಯದ ಸಾಹಸದ ಬಗ್ಗೆ ಹಲವು ದಂತಕಥೆಗಳೇ ಇವೆ.

ಈ ಸೈನಿಕರ ಸಾಹಸ ಬಿಂಬಿಸುವ ಕೋರೆಗಾಂವ್ ಸ್ಥಂಭ (ವಿಜಯ ಸ್ಥಂಭ) ಭಾರತಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಇತ್ತು. ಇಪ್ಪತ್ತೆರಡು ಮಹರ್ ಸೈನಿಕರ ತ್ಯಾಗದ ಬಗ್ಗೆ ಅದರಲ್ಲಿ ಪ್ರಸ್ತಾವ ಇತ್ತು. ಇಂದಿಗೂ ಆ ಸ್ಮಾರಕ ಅಸ್ಪೃಶ್ಯರ (ಮಹರ್) ವೀರ ಕಥೆಗೆ ಸಾಕ್ಷಿಯಂತೆ ಇದೆ. ಡಾ.ಬಿ.ಆರ್.ಅಂಬೇಡ್ಕರ್ ಪ್ರತಿವರ್ಷ ಜನವರಿ ಒಂದರಂದು ಭೀಮಾ ಕೋರೆಗಾಂವ್ ಗೆ ಭೇಟಿ ನೀಡಿ, ಗೌರವ ಸಲ್ಲಿಸುತ್ತಿದ್ದರು.

28/12/2022

ದಲಿತ ಮುಖ್ಯ ಮಂತ್ರಿ ಡ॥ ಜಿ ಪರಮೇಶ್ವರ್

*ಬಲ್ಲಿರ!?  ಜಗತ್ತಿನ ಪ್ರತಿಯೊಂದು ದಾಖಲೆಯೂ ಬಾಬಾಸಾಹೇಬರ ಹೆಸರಿನಲ್ಲಿದೆ.*  *ಬಾಬಾಸಾಹೇಬರ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಆದಷ್ಟು ಶೇರ್ ಮಾಡಿ....
02/12/2022

*ಬಲ್ಲಿರ!? ಜಗತ್ತಿನ ಪ್ರತಿಯೊಂದು ದಾಖಲೆಯೂ ಬಾಬಾಸಾಹೇಬರ ಹೆಸರಿನಲ್ಲಿದೆ.*

*ಬಾಬಾಸಾಹೇಬರ ಬಗ್ಗೆ ಎಲ್ಲರಿಗೂ ತಿಳಿಯುವಂತೆ ಆದಷ್ಟು ಶೇರ್ ಮಾಡಿ....*

1. ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿ
2. ಹೆಚ್ಚಿನ ಪುಸ್ತಕ ಬರೆದವರು
3. ವೇಗವಾದ ಟೈಪ್ ಮಾಡುತ್ತಿದ್ದವರು
4. ಹೆಚ್ಚು ಟೈಪ್ ಮಾಡಿದ ಪದಗಳು
5. ಅತಿ ಹೆಚ್ಚು ಚಳುವಳಿಗಳನ್ನು ಮಾಡಿದವರು
6. ಎಲ್ಲಾ ಜಾತಿಯ ಮಹಿಳೆಯರ ಹಕ್ಕುಗಳಿಗಾಗಿ ಮಂತ್ರಿ ಪದವಿಗೆ ರಾಜೀನಾಮೆ ನೀಡಿದವರು
7. ದಲಿತರು, ಹಿಂದುಳಿದವರ ಹಕ್ಕುಗಳನ್ನು ತಂದುಕೊಟ್ಟವರು.
8. ವರ್ಣ ಪದ್ಧತಿಯಿಂದ ಜನರನ್ನು ವಿಭಾಗ ಮಾಡಿದ ಹಿಂದೂ ಧರ್ಮ ಗ್ರಂಥಗಳಾದ ಮನುಸ್ಮೃತಿಯನ್ನು ಅಡ್ಡದಾರಿಯಲ್ಲಿ ಸುಟ್ಟವರುವರು
9. ಜಾತೀಯತೆ ತೊಲಗಿಸಲು ತಮ್ಮ ಪಾಂಡಿತ್ಯದಿಂದ ಸಾಧನೆ ಮಾಡಿದವರು
10. ಬಡ ಜನರ ಹಕ್ಕುಗಳಿಗಾಗಿ ತ್ಯಾಗ ಮಾಡಿ 4 ಮಕ್ಕಳನ್ನು ತ್ಯಾಗಮಾಡಿದವರು.
11. 2 ಲಕ್ಷ ಪುಸ್ತಕಗಳನ್ನು ಓದಿ ಕಂಠಪಾಠ ಮಾಡಿದವರು
12. ಭಾರತದ ಸಂವಿಧಾನವನ್ನು ಬರೆದವರು
13. ಪೂನಾ ಒಪ್ಪಂದವನ್ನು ಬರೆದರು
14. ಮೂಕ್ ನಾಯಕ್ ಪತ್ರಿಕೆ ಹೊರತಂದವರು
15. ಭಹಿಸ್ಕೃತ ಭಾರತ ಪತ್ರಿಕೆಯನ್ನು ಹೊರತಂದವರು
16. ವೇಗದ ಬರಹಗಾರರು
17. ಎರಡು ಕೈಯಲ್ಲೂ ಬರಹಗಾರರು
18. ಗಾಂಧೀಜಿಗೆ ಜೀವದಾನ ಮಾಡಿದವರು
19. ಅತ್ಯಂತ ಸಮರ್ಥ ಬ್ಯಾರಿಸ್ಟರ್
20. ಮುಂಬೈನ ಸೇಠ್ ಮಗನನ್ನು ನಕಲಿ ಪ್ರಕರಣದಿಂದ ಖುಲಾಸೆಗೊಳಿಸಿದವನು
21. ಯೋಗ ಮಾಡುವವರು
22. ಅತ್ಯಂತ ಪ್ರಾಮಾಣಿಕರು
23. 18 ರಿಂದ 20 ಗಂಟೆಗಳ ಅಧ್ಯಯನ ಮಾಡಿದವರು
24. obc ಅರ್ಥವನ್ನು ಸರ್ದಾರ್ ಪಟೇಲ್ ಅವರಿಗೆ ಹೇಳಿಕೊಟ್ಟವರು
25. ಶಾಲೆಯ ಹೊರಗೆ ಕುಳಿತು ಅವಮಾನ ಅನುಭವಿಸುತ್ತಾ ಉನ್ನತ ಶಿಕ್ಷಣ ಪಡೆದವರು
25. ಪತ್ನಿ ರಮಾಬಾಯಿಯನ್ನು ಕಳೆದುಕೊಂಡವರು ನಮ್ಮೆಲ್ಲರ ಒಳಿತಿಗಾಗಿ.........

ಬಾಬಾಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಜಿ ಅವರ ಕಿರು ಪರಿಚಯ...

ಈ ಕೆಳಗಿನಂತೆ 9 ಭಾಷೆಗಳು ತಿಳಿದಿದ್ದವು

1. ಮರಾಠಿ (ಮಾತೃಭಾಷೆ)
2. ಹಿಂದಿ
3. ಸಂಸ್ಕೃತ
4.ಗುಜರಾತಿ
5. ಇಂಗ್ಲೀಷ್
6.ಪಾರ್ಸಿ
7. ಜರ್ಮನ್
8.ಫ್ರೆಂಚ್
9. ಪಾಲಿ

ಅವರು ಪಾಲಿ ವ್ಯಾಕರಣ ಮತ್ತು ನಿಘಂಟನ್ನು ಸಹ ಬರೆದಿದ್ದಾರೆ, ಇದನ್ನು ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದೆ. "ಡಾ.ಬಾಬಾಸಾಹೇಬ್ ಅಂಬೇಡ್ಕರ್ ಬರವಣಿಗೆ ಮತ್ತು
"ಭಾಷಣಗಳು ಸಂಪುಟ.16" ರಲ್ಲಿ ಮಹಾರಾಷ್ಟ್ರ ಸರ್ಕಾರವು ಪ್ರಕಟಿಸಿದೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನಲ್ಲಿ ಕೆಳಕಂಡ ಮಸೂದೆಯನ್ನು ಮಂಡಿಸಿದರು.

1. ಮಹಾರ್ ಸಂಬಳ ಬಿಲ್
2.ಹಿಂದೂ ಕೋಡ್ ಬಿಲ್
3. ಜನತಾ ಮಸೂದೆಯ ಪ್ರಾತಿನಿಧ್ಯ
4. ಹೆರಿಗೆ ರಜೆಗಾಗಿ ಬಿಲ್
5. ಮಂತ್ರಿಗಳ ಸಂಬಳ ಬಿಲ್
6.ಕಾರ್ಮಿಕರಿಗೆ ಸಂಬಳ ಬಿಲ್
7. ಉದ್ಯೋಗ ವಿನಿಮಯ ಕೇಂದ್ರ ಸೇವೆ
8.ಪಿಂಚಣಿ ಬಿಲ್
9. ಭವಿಷ್ಯ ನಿಧಿ (PF) ಬಿಲ್

ಬಾಬಾಸಾಹೇಬರ ಸತ್ಯಾಗ್ರಹ (ಚಳುವಳಿ)

1.ಮಹದ್ ಚಳುವಳಿ 20/3/1927
2.ಮೊಹಾಲಿ (ಧುಲೆ) ಚಳುವಳಿ 12/2/1939
3.ಅಂಬಾದೇವಿ ದೇವಸ್ಥಾನ ಪ್ರವೇಶ ಚಳವಳಿ 26/7/1927
4.ಪುಣೆ ಕೌನ್ಸಿಲ್ ಚಳುವಳಿ 4/6/1946
5. ಮೌಂಟೇನ್ ಮೂವ್ಮೆಂಟ್ 22/9/1929
6. ನಾಗ್ಪುರ ಚಳುವಳಿ 3/9/1946
7.ಕಲಾರಾಮ್ ಮಂದಿರ ಪ್ರವೇಶ ಚಳವಳಿ 2/3/1930
8.ಲಕ್ನೋ ಚಳುವಳಿ 2/3/1947
9.ಮುಖೇದ್ ಚಳುವಳಿ 23/9/1931

ಬಾಬಾಸಾಹೇಬ್ ಅಂಬೇಡ್ಕರ್ ಸ್ಥಾಪಿಸಿದ ಸಾಮಾಜಿಕ ಸಂಘಟನೆ

1.ಬಹಿಷ್ಕೃತ ಹಿತ್ಕಾರಿಣಿ ಸಭಾ - 20 ಜುಲೈ 1924
2. ಸಮತಾ ಸೈನಿಕ್ ದಳ - 3 ಮಾರ್ಚ್ 1927

ರಾಜಕೀಯ ಸಂಘಟನೆ

1. ಸ್ವತಂತ್ರ ಮಜ್ದೂರ್ ಪಾರ್ಟಿ - 16 ಆಗಸ್ಟ್ 1936
2. ಪರಿಶಿಷ್ಟ ಜಾತಿ ಒಕ್ಕೂಟ - 19 ಜುಲೈ 1942
3. ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ - 3 ಅಕ್ಟೋಬರ್ 1957

ಧಾರ್ಮಿಕ ಸಂಘಟನೆ

1. ಭಾರತೀಯ ಬೌದ್ಧ ಮಹಾಸಭಾ -
4 ಮೇ 1955

ಶೈಕ್ಷಣಿಕ ಸಂಸ್ಥೆ

1.ಡಿಪ್ರೆಸ್ಡ್ ಕ್ಲಾಸ್ ಎಜುಕೇಶನ್ ಸೊಸೈಟಿ- 14 ಜೂನ್ 1928
2. ಪೀಪಲ್ಸ್ ಎಜುಕೇಶನ್ ಸೊಸೈಟಿ - 8 ಜುಲೈ 1945
3. ಸಿದ್ಧಾರ್ಥ ಕಾಲೇಜು, ಮುಂಬೈ - 20 ಜೂನ್ 1946
4. ಮಿಲಿಂದ್ ಕಾಲೇಜು, ಔರಂಗಾಬಾದ್ - 1 ಜೂನ್ 1950

ಬಾಬಾ ಸಾಹೇಬರಿಂದ ಪ್ರಕಟವಾದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

1. ಮೂಕ ನಾಯಕ್ - 31 ಜನವರಿ 1920
2. ಬಹಿಷ್ಕೃತ ಭಾರತ - 3 ಏಪ್ರಿಲ್ 1927
3.ಸಮತಾ- 29 ಜೂನ್ 1928
4 ಜನತಾ - 24 ನವೆಂಬರ್ 1930
5.ಪ್ರಬುದ್ಧ ಭಾರತ- 4 ಫೆಬ್ರವರಿ 1956

ಬಾಬಾಸಾಹೇಬ್ ಅಂಬೇಡ್ಕರ್ ತಮ್ಮ ಜೀವನದಲ್ಲಿ ವಿವಿಧ ವಿಷಯಗಳ ಕುರಿತು 527 ಕ್ಕೂ ಹೆಚ್ಚು ಭಾಷಣಗಳನ್ನು ನೀಡಿದ್ದಾರೆ.

ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂದ ಸನ್ಮಾನಗಳು.

1.ಭಾರತ ರತ್ನ
2.ವಿಶ್ವದ ಶ್ರೇಷ್ಠ ವ್ಯಕ್ತಿ (ಕೊಲಂಬಿಯಾ ವಿಶ್ವವಿದ್ಯಾಲಯ)
3 ಯೂನಿವರ್ಸ್ ಮೇಕರ್ (ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ)
4. ದಿ ಗ್ರೇಟೆಸ್ಟ್ ಇಂಡಿಯನ್ (CNN IBN & History Tv

ಬಾಬಾಸಾಹೇಬ್ ಅಂಬೇಡ್ಕರ್ ಜಿ
ವೈಯಕ್ತಿಕ ಲೈಬ್ರರಿ ಪುಸ್ತಕಗಳು (ಅವರು ಹೊಂದಿದ್ದರು)

1. ಇಂಗ್ಲಿಷ್ ಸಾಹಿತ್ಯ - 1300 ಪುಸ್ತಕಗಳು
2. ರಾಜಕೀಯ - 3,000 ಪುಸ್ತಕಗಳು
3. ಯುದ್ಧಶಾಸ್ತ್ರ- 300 ಪುಸ್ತಕಗಳು
4. ಅರ್ಥಶಾಸ್ತ್ರ - 1100 ಪುಸ್ತಕಗಳು
5. ಇತಿಹಾಸ - 2,600 ಪುಸ್ತಕಗಳು
6. ಧರ್ಮ- 2000 ಪುಸ್ತಕಗಳು
7. ಕಾನೂನು - 5,000 ಪುಸ್ತಕಗಳು
8) ಸಂಸ್ಕೃತ- 200 ಪುಸ್ತಕಗಳು
9. ಮರಾಠಿ- 800 ಪುಸ್ತಕಗಳು
10. ಹಿಂದಿ- 500 ಪುಸ್ತಕಗಳು
11. ತತ್ವಶಾಸ್ತ್ರ - 600 ಪುಸ್ತಕಗಳು
12. ವರದಿ- 1,000
13.ಉಲ್ಲೇಖ ಪುಸ್ತಕಗಳು - 400 ಪುಸ್ತಕಗಳು
14.ಪತ್ರಗಳು ಮತ್ತು ಭಾಷಣಗಳು- 600
15. ಜೀವನಚರಿತ್ರೆ (ಜೀವನಚರಿತ್ರೆ) - 1200
16. ಎನ್‌ಸೈಕ್ಲೋಪೀಡಿಯಾ ಆಫ್ ಬ್ರಿಟಾನಿಕಾ - ಸಂಪುಟಗಳು 1 ರಿಂದ 29
17. ಎನ್ಸೈಕ್ಲೋಪೀಡಿಯಾ ಆಫ್ ಸೋಶಿಯಲ್ ಸೈನ್ಸ್ - ಸಂಪುಟಗಳು 1 ರಿಂದ 15
18. ಕ್ಯಾಥೋಲಿಕ್ ಎನ್ಸೈಕ್ಲೋಪೀಡಿಯಾ - ಸಂಪುಟಗಳು 1 ರಿಂದ 12
19. ಎನ್ಸೈಕ್ಲೋಪೀಡಿಯಾ ಆಫ್ ಎಜುಕೇಶನ್
20. ಇತಿಹಾಸಕಾರರ ಪ್ರಪಂಚದ ಇತಿಹಾಸ - ಸಂಪುಟಗಳು 1 ರಿಂದ 25
21. ದೆಹಲಿಯಲ್ಲಿ ಇರಿಸಲಾಗಿರುವ ಪುಸ್ತಕಗಳು - ಬುದ್ಧ ಧಮ್ಮ, ಪಾಲಿ ಸಾಹಿತ್ಯ, ಮರಾಠಿ ಸಾಹಿತ್ಯ - 2000 ಪುಸ್ತಕಗಳು
22. ಉಳಿದ ವಿಷಯಗಳ ಕುರಿತು 2305 ಪುಸ್ತಕಗಳು

ಅದಕ್ಕಾಗಿಯೇ ಬ್ರಿಟಿಷರು ಅವರನ್ನು ಚಲಿಸುವ ಗ್ರಂಥಾಲಯ ಎಂದು ಕರೆಯುತ್ತಿದ್ದರು.

ಒಬ್ಬ ಮನುಷ್ಯನ ಜೀವಿತ ಕಾಲದಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ. ಅದಕ್ಕೆ ಜಗತ್ತು ಅವರನ್ನು "Symbol of knowledge " ಎಂದು ಅವರನ್ನು ಗೌರವಿಸುತ್ತದೆ.
*ಜೈ ಭೀಮ್
ದಯವಿಟ್ಟು ನಿಮ್ಮ ಅನಿಸಿಕೆಯನ್ನು ಕಮೆಂಟ್ ಮೂಲಕ ತಿಳಿಸಿ ಮತ್ತೊಬ್ಬರಿಗೂ ಶೇರ್ ಮಾಡಿ

1) #ಗಾಂಧೀಜಿಯವರು ಏನು ಮಾಡಿದರು....?ಉ:-ಸ್ವತಂತ್ರ ತಂದು ಕೊಟ್ಟರು.ಗಾಂಧಿ ಕುರಿತ ಈ ಮೇಲಿನ ಪ್ರಶ್ನಗೆ ಒಂದು ಪ್ರಶ್ನೆ, ಒಂದೇ ಉತ್ತರ........ಅಲ...
25/11/2022

1) #ಗಾಂಧೀಜಿಯವರು ಏನು ಮಾಡಿದರು....?
ಉ:-ಸ್ವತಂತ್ರ ತಂದು ಕೊಟ್ಟರು.
ಗಾಂಧಿ ಕುರಿತ ಈ ಮೇಲಿನ ಪ್ರಶ್ನಗೆ ಒಂದು ಪ್ರಶ್ನೆ, ಒಂದೇ ಉತ್ತರ........ಅಲ್ಲವೇ ...?
ಅದೇ
2) #ಅಂಬೇಡ್ಕರ್ ಏನು ಮಾಡಿದರು....?ಎಂದು ಕೇಳಿದಾಗ
ಒಬ್ಬ:-ಸಂವಿದಾನ ಬರೆದರು
ಮತ್ತೊಬ್ಬ:-ಶೋಷಿತರ ವಿಮೋಚನೆ ಮಾಡಿದರು.
ಇನ್ನೊಬ್ಬ :-ಸಮಾನತೆ ಜಾರಿಗೊಳಿಸಿದರು.
ಮಗದೊಬ್ಬ:-ದಟ್ಟ ದರಿದ್ರರಿಗೆ ಸ್ವಾಭಿಮಾನ ಹೆಳಿಕೊಟ್ಟರು.
ಮತ್ತೊಬ್ಬ :- ಕಡ್ಡಾಯ ಮತ್ತು ಉಚಿತ ಶಿಕ್ಷಣ ನೀಡಿದರು.
ಇನ್ನೊಬ್ಬ :-ಬುದ್ದರನ್ನು ಮತ್ತೆ ಭಾರತದಲ್ಲಿ ಮರುಸ್ಥಾಪಿಸಿದರು.
Next:- ಭಾರತದ ಪ್ರಜಾಪ್ರಭುತ್ವದ ತಂದೆ.
Next:-ವಿಶ್ವರತ್ನ.
Next:-ಜಗತ್ತಿನ ಮಹಾನ್ ವಿದ್ವಾಂಸರು.
Next :-ಭಾರತದ RBI ಸ್ಥಾಪನೆಗೆ ಕಾರಣೀಭೂತರು.
Next:-ಭಾರತದ ಅಣೆಕಟ್ಟನ್ನು ಕಟ್ಟಿಸಿದರು.
Next:-ರಾಜಕೀಯ ನೇತಾರ.
Next:-ಮನುವಾದಿರಾಜಕೀಯ ಪಕ್ಷಗಳಿಗೆ ಪರ್ಯಾಯ ಪಕ್ಷ ಸ್ಥಾಪಕರು.
Next;- ಭಾರತದ ಮಹಿಳೆಯರನ್ನು ವಿಮೋಚನೆ ಗೊಳಿಸಿದರು.
Next;-ಕಾರ್ಮಿಕರ ವಿಮೋಚನೆ ಮಾಡಿದರು.
Next:-ಬಾರತದ ಎಲ್ಲರಿಗೂ ಶಿಕ್ಷಣವನ್ನು ಉಚಿತ ಮತ್ತು ಕಡ್ಡಾಯಗೊಳಿಸಿದರು.
Next:- ಭಾರತದ ಎಲ್ಲಾ ಜನಾಂಗದವರಿಗೂ ಮತದಾನ ಮಾಡುವ ಹಕ್ಕನ್ನು ಜಾರಿಗೆ ತಂದರು.
Next:-
Next......next.....next.....
ಉತ್ತರಗಳು ಒಂದೇ ಎರಡೇ......ಹೀಗೆ ಬೆಳೆಯುತ್ತಾ ಸಾಗುತ್ತದೆ.
ಒಂದೇ ಪ್ರಶ್ನೆಗೆ ಸಾವಿರಾರು ಉತ್ತರಗಳನ್ನು ನಿರೀಕ್ಷಿಸ ಬಲ್ಲ "*ಅಂಬೇಡ್ಕರ್ "ಎನ್ನುವ ಹೆಸರೇ ರೋಮಾಂಚಕಾರಿಯಾದುದು*......ಅಲ್ಲವೇ.?.

#ಜೈ_ಭೀಮ್ 💙✊✊

ಡಾ.ಬಿ.ಆರ್.ಅಂಬೇಡ್ಕರ್ರಾಮಜೀ ಸಕ್ಷಾಲ್ ಭೀಮಾಬಾಯಿ ಉದರದಿ ಭೀಮ ಜನಿಸಿದರು ನಗು ನಗುತ ಶಾಲೆಗೆ ಹೋಗಿ ಜಾಣರ ಜಾಣ ಎನಿಸಿದರುಬಾಲ್ಯದಲ್ಲೇ ಹೋರಾಡುತ್ತ ...
25/10/2022

ಡಾ.ಬಿ.ಆರ್.ಅಂಬೇಡ್ಕರ್
ರಾಮಜೀ ಸಕ್ಷಾಲ್ ಭೀಮಾಬಾಯಿ ಉದರದಿ ಭೀಮ ಜನಿಸಿದರು ನಗು ನಗುತ ಶಾಲೆಗೆ ಹೋಗಿ ಜಾಣರ ಜಾಣ ಎನಿಸಿದರು
ಬಾಲ್ಯದಲ್ಲೇ ಹೋರಾಡುತ್ತ ಅನುದಿನವೂ ನೊಂದರು ಅವಮಾನ ಶೋಷಣೆಯ ಬೆಂಕಿಯಲ್ಲಿ ಬೆಂದರು
ಗುರುಗಳ ನೆಚ್ಚಿನ ಶಿಷ್ಯನಾಗಿ ಭೀಮರಾವ್ ನಡೆದರು ಗುರುವಿನ ಹಾರೈಕೆಯಲ್ಲಿ ಅಂಬೇಡ್ಕರ್ ಹೆಸರು ಪಡೆದರು
ಸ್ವಾತಂತ್ರ್ಯ ಹೋರಾಟದಲ್ಲಿ ಮಹಾನಾಯಕ ಧುಮುಕಿದರು ಭಾರತಾಂಬೆಯ ಸೇವೆಗೆಂದು ಸಂವಿಧಾನ ಬರೆದರು
ಭಾರತದ ಪ್ರಜೆಗಳಿಗೆಲ್ಲ ಸಮಾನ ಹಕ್ಕು ನೀಡಿದರು ಮೇಲು ಕೀಳು ಭಾವ ಬಿಟ್ಟು ಬೆಳೆಯುವಂತೆ ಮಾಡಿದರು
ಹಳ್ಳಿಯಿಂದ ದಿಲ್ಲಿಯವರೆಗೂ ಅಂಬೇಡ್ಕರ್ ಕಾಣುವರು ಸನ್ಮಾರ್ಗದಲ್ಲೇ ಸಾಗಿರಿ ಎಂದು ಕೈಯಲ್ಲೇ ಸಂದೇಶ ತೋರುವರು
ಸತ್ಯ ಎನಿಸಿದರೆ ಶೇರ್ ಮಾಡಿ ಫಾಲೊ ಮಾಡಿ

Address

Bangalore
562034

Telephone

+919019817820

Website

Alerts

Be the first to know and let us send you an email when ನಾವು ಡಾ।।ಬಿ.ಆರ್.ಅಂಬೇಡ್ಕರ್ ಅಭಿಮಾನಿಗಳು posts news and promotions. Your email address will not be used for any other purpose, and you can unsubscribe at any time.

Share

Category