Suvidha Namma Super Market

Suvidha Namma Super Market A Retail Market venture by Suvidha Souhardha Multipurpose Cooperative Ltd

We are a co-operative organization with the goal of co-existence and equal share for everyone - registered under Souharda cooperative act in the name of "Suvidha Multipurpose Souharda Cooperative Ltd"." Our goal:
A sincere effort to provide people of sagar taluk with all the materials needed for daily life with promise of best quality and accurate weight, all under one roof with our venture Namma

super market. Management:
Business is carried out with guidance of 15 member board of directors and 15 member advisory board, elected by members of cooperative as per cooperative Bye law. Where:
In around 13000 sq feet of building and 27000 sq ft of empty space of Sri Dwarakanatha kalamandira complex, Rajendra prasad road, Sagar.

ಸಿಪಿವೈ ನಾಲ್ಕು ಬಾರಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬಹುದು. ಪ್ರಸಾದ ನಾಳೆ ಸಾಗರದ ಎಂಎಲ್‌ಎ ಟಿಕೆಟ್‌ಗಾಗಿ ಬಿಜೆಪಿಗೆ ಸೇರಬಾರದೇಕೆ?
24/10/2024

ಸಿಪಿವೈ ನಾಲ್ಕು ಬಾರಿ ಕಾಂಗ್ರೆಸ್‌ಗೆ ಪಕ್ಷಾಂತರ ಮಾಡಬಹುದು. ಪ್ರಸಾದ ನಾಳೆ ಸಾಗರದ ಎಂಎಲ್‌ಎ ಟಿಕೆಟ್‌ಗಾಗಿ ಬಿಜೆಪಿಗೆ ಸೇರಬಾರದೇಕೆ?

19/09/2024
ಒಂದು ಮನವಿ...ಕನ್ನಡದ ಗೌರವವನ್ನು ತಮ್ಮ ನಿರೂಪಣಾ ಸಾಮರ್ಥ್ಯದ ಮೂಲಕವೇ ಎತ್ತಿಹಿಡಿದಿದ್ದ ಅಪರ್ಣಾ ವಸ್ತಾರೆ ನಿರ್ಗಮನದ ಬಗ್ಗೆ ಎರಡು ಹನಿ ಕಣ್ಣೀರು...
12/07/2024

ಒಂದು ಮನವಿ...
ಕನ್ನಡದ ಗೌರವವನ್ನು ತಮ್ಮ ನಿರೂಪಣಾ ಸಾಮರ್ಥ್ಯದ ಮೂಲಕವೇ ಎತ್ತಿಹಿಡಿದಿದ್ದ ಅಪರ್ಣಾ ವಸ್ತಾರೆ ನಿರ್ಗಮನದ ಬಗ್ಗೆ ಎರಡು ಹನಿ ಕಣ್ಣೀರು ಹಾಕಿ ಶ್ರದ್ಧಾಂಜಲಿ ಅರ್ಪಿಸೋಣ.
ಅದೇ ವೇಳೆ ಅವರ ಸಾವಿನ ಕಾರಣಗಳನ್ನು ಕೆದಕಿ, ರೋಗದ ನೆನಪು ಮಾಡಿಕೊಂಡು ಮಾತನಾಡುವುದನ್ನು ನಿಲ್ಲಿಸಿ ಬಿಡೋಣ.
ನಮ್ಮ ಸುತ್ತ ದೊಡ್ಡ ಸಂಖ್ಯೆಯ ಕ್ಯಾನ್ಸರ್ ಪೇಶೆಂಟ್‌ಗಳಿದ್ದಾರೆ. ಅವರಿಗೆ ‘ಇಂತಹ ಕಾಯಿಲೆಯಿಂದ ಇಂತವರು ಸತ್ತರು. ಇವರಿಗಿಷ್ಟೇ ವಯಸ್ಸಾಗಿತ್ತು ಎಂಬುದು ಅವರ ಉಸಿರಿನ ಹೋರಾಟಕ್ಕೆ ಸಾಥ್ ಕೊಡಬೇಕಾದ ಆತ್ಮವಿಶ್ವಾಸವನ್ನು ಉಡುಗಿಸಿಬಿಡುತ್ತದೆ.
ಹಾಗಾಗದಿರಲಿ...

ಜುಲೈ 1-15ರ ಸಂಚಿಕೆ...ಎಂದಿನಂತೆ ಪತ್ರಿಕೆ ಮುದ್ರಣಗೊಳ್ಳುತ್ತಿದೆ.ಎಂದಿನಂತೆ ಭಾನುವಾರ ಅಡ್ಡ ಬಂದಿದ್ದರಿಂದ... ಪತ್ರಿಕೆ ಅಂಚೆಗೆ ಬೀಳುವುದು ಮಂಗ...
30/06/2024

ಜುಲೈ 1-15ರ ಸಂಚಿಕೆ...
ಎಂದಿನಂತೆ ಪತ್ರಿಕೆ ಮುದ್ರಣಗೊಳ್ಳುತ್ತಿದೆ.
ಎಂದಿನಂತೆ ಭಾನುವಾರ ಅಡ್ಡ ಬಂದಿದ್ದರಿಂದ...
ಪತ್ರಿಕೆ ಅಂಚೆಗೆ ಬೀಳುವುದು ಮಂಗಳವಾರವಾಗಬಹುದು!
ಮಳೆ ಬೀಳುತ್ತಿರುವುದರಿಂದ ಚಳಿ ಅಗಬಹುದು.
ಸಂಚಿಕೆ ಮಾತ್ರ ಈ ಬಾರಿ ಹೆಚ್ಚು ಹಾಟ್ ಹಾಟ್ ಆಗಿದೆ!
ಎಂದಿನಂತೆ ಮುಖಪುಟ 👇 ನಿಮ್ಮ ವಾಟ್ಸ್‌ಅಪ್ ಸ್ಟೇಟಸ್‌ನಲ್ಲಿ ಒಮ್ಮೆಯಾದರೂ ಇರಲಿ...
ಪುಟ್ಟ ವಿನಂತಿ; ಸೋಷಿಯಲ್ ಮೀಡಿಯಾಗಳಲ್ಲಿಯೂ ಪತ್ರಿಕೆಗೆ ಪ್ರಚಾರ ಕೊಡಿ...

ತಲೆ ಕೆಟ್ಟಿದೆಯೇ ಶಿಕ್ಷಣ ಇಲಾಖೆಗೆ??ನಾಳೆ ಯೋಗ ದಿನಾಚರಣೆ. ಹಾಗೆಂದು ಗೊತ್ತಾಗಿ ಎಷ್ಟು ದಿನ, ತಿಂಗಳು ಆಯಿತು? ಮಕ್ಕಳಿಗೆ ‘ತುಘಲಕ್ ದರ್ಬಾರ್’ ಎಂ...
20/06/2024

ತಲೆ ಕೆಟ್ಟಿದೆಯೇ ಶಿಕ್ಷಣ ಇಲಾಖೆಗೆ??
ನಾಳೆ ಯೋಗ ದಿನಾಚರಣೆ. ಹಾಗೆಂದು ಗೊತ್ತಾಗಿ ಎಷ್ಟು ದಿನ, ತಿಂಗಳು ಆಯಿತು? ಮಕ್ಕಳಿಗೆ ‘ತುಘಲಕ್ ದರ್ಬಾರ್’ ಎಂದರೇನು ಎಂಬ ಕುತೂಹಲ ತಣಿಸಲು ಇಲಾಖೆ ಈ ರೀತಿ ಮಾಡುತ್ತಿದೆಯೇ?
ಏನು ಮಾಡಿದೆ ಗೊತ್ತಾ, ಪ್ರತಿ ವರ್ಷ ಜೂನ್ ೨೧ ಯೋಗ ಡೇ. ಅದನ್ನು ವಿಜೃಂಭಣೆಯಿಂದ ಆಚರಿಸಬೇಕೆಂದಿದ್ದರೂ ಓಕೆ. ಅದಕ್ಕೆಲ್ಲ ಶಾಲೆಗಳು ತಯಾರಿ ಮಾಡಿಕೊಂಡಿವೆ.
ನಾಳೆ ಶುಕ್ರವಾರ. ಪೂರ್ತಿ ದಿನದ ತರಗತಿಗಳಿವೆ. ಅದರಲ್ಲಿಯೇ ಯೋಗ ದಿನದ ಚಟುವಟಿಕೆಗಳೂ ಸೇರಿವೆ. ಇವತ್ತು ಗುರುವಾರ. ಇಡೀ ದಿನ ಶಿಕ್ಷಣ ಇಲಾಖೆ ಬೆಳಗಿನಿಂದ ಸಂಜೆಯವರೆಗೆ ಕೆಲಸ ಮಾಡಿರಬೇಕು. ಗೊತ್ತಿಲ್ಲ, ಸಂಜೆ, ಶಾಲೆಗಳೆಲ್ಲ ಮುಚ್ಚಿದ ನಂತರವೂ ಕೆಲಸ ಮಾಡಿರುವುದಂತೂ ಖರೆ! ಸಂಜೆ ಆರರ ವೇಳೆಗೆ ಬೆಂಗಳೂರಿನ ಶಿಕ್ಷಣ ಆಯುಕ್ತರ ಕಚೇರಿಯ ನಿರ್ದೇಶಕರು ತುರ್ತು ಆದೇಶ ಹೊರಡಿಸಿದ್ದಾರೆ, ನಾಳೆ ಕ್ಲಾಸ್‌ಗಳು ಶನಿವಾರದಂತೆ, ನಾಡಿದ್ದು ಶನಿವಾರ ಪೂರ್ತಿ ದಿನದ ಪಾಠ, ತರಗತಿ, ಶಾಲೆ!
ಬದಲಾವಣೆಯನ್ನು ಪ್ರತಿ ಮಗುವಿಗೆ ತಿಳಿಸಬೇಕು. ಶಾಲಾ ವ್ಯಾನ್‌ಗಳ ಚಾಲಕರಿಗೆ ಸಮಯ ಬದಲಾವಣೆ ಗೊತ್ತಾಗಬೇಕು. ಬಿಸಿಯೂಟದವರಿಗೆ ಶಾಲೆ ೧೨ಕ್ಕೆ ಮುಗಿಯುವುದನ್ನು ತಿಳಿಸಬೇಕು, ಅವರು ಶನಿವಾರದ ಮೆನು ತಯಾರಿಸಬೇಕು. ಹಳ್ಳಿಗಳಲ್ಲಿ, ಮೊಬೈಲ್ ಸಿಗ್ನಲ್‌ಗೂ ತತ್ವಾರ ಇರುವಲ್ಲಿ ಮಾಹಿತಿ ರವಾನೆಯೇ ದೊಡ್ಡ ತ್ರಾಸ.
ಇಷ್ಟಕ್ಕೂ ಈ ಬದಲಾವಣೆ ಏಕೆ ಆಯಿತು? ಇಷ್ಟು ತಡವಾಗಿ ತೆಗೆದುಕೊಳ್ಳಲು ಕಾರಣ ಏನು? ಕಾರಣರಾದವರಿಗೆ ಶಿಕ್ಷೆ ಬೇಡವೇ? ಆದೇಶದ ಕಾರಣದಿಂದ ಗಡಿಬಿಡಿಗೆ ಬಿದ್ದ ಮುಖ್ಯ ಶಿಕ್ಷಕರು, ಸಹಶಿಕ್ಷಕರು, ಪೋಷಕರಿಗೆ ತಿಳಿಸಲು ಪಡುವ ಪರಿಪಾಡಲು... ಇವರಿಗೇಕೆ ಶಿಕ್ಷೆ?
- ಮಾ.ವೆಂ.ಸ.ಪ್ರಸಾದ್, ವರದಿಗಾರ ‘ಉದಯವಾಣಿ’ ಹಾಗೂ ಕಾರ್ಯನಿರ್ವಾಹಕ ಸಂಪಾದಕ ‘ನಂ ಸಮಾಚಾರ’

ಚಿಲ್ಲರೆ; ಚಿಲ್ಲರೆ ವಿಷಯವಲ್ಲ!ಈಗ 20 ರೂ. ಕಾಯಿನ್ ಬಂದಿದೆ, 10 ರೂ. ನಾಣ್ಯ ಅಂತೂ ಇಂತೂ ಚಲಾವಣೆ ಆಗುತ್ತಿದೆ. ಆದರೆ ಚಿಲ್ಲರೆ ಕಾಸುಗಳು ಒಂದು ರೂ...
16/06/2024

ಚಿಲ್ಲರೆ; ಚಿಲ್ಲರೆ ವಿಷಯವಲ್ಲ!
ಈಗ 20 ರೂ. ಕಾಯಿನ್ ಬಂದಿದೆ, 10 ರೂ. ನಾಣ್ಯ ಅಂತೂ ಇಂತೂ ಚಲಾವಣೆ ಆಗುತ್ತಿದೆ. ಆದರೆ ಚಿಲ್ಲರೆ ಕಾಸುಗಳು ಒಂದು ರೂಪಾಯಿಯೋ, ಎರಡೋ, ಹತ್ತು ರೂಪಾಯಿಯೋ, ಇಪ್ಪತ್ತೋ ಎಂದು ಕಂಡುಕೊಳ್ಳಲು ತಿಣುಕಾಡಬೇಕಾಗಿದೆ. ಸರ್ಕಾರ ಹಠ ಬಿದ್ದಂತಿದೆ, ಯಾರಿಗೂ ಇದು ಹತ್ತಾರು ವರ್ಷ ಕಳೆದರೂ ಅರ್ಥವಾಗಬಾರದು, ಹಾಗೆ ನಾಣ್ಯಗಳನ್ನು ರೂಪಿಸಲಾಗಿದೆ.
ಸರ್ಕಾರಗಳು ದೊಡ್ಡ ದೊಡ್ಡ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ದೊಡ್ಡ ಪರಿಣಾಮ ಬೀರುವ ಸಣ್ಣ ಸಣ್ಣ ವಿಷಯಗಳಲ್ಲೂ ಹೆಚ್ಚು ಗಮನ ಹರಿಸಬೇಕು. ಹಿಂದೆ ಈ ರೀತಿ ಇರಲಿಲ್ಲ. ಅವತ್ತಿನ ಒಂದು, ಎರಡು, ಮೂರು, ಐದು, ಹತ್ತು, ಇಪ್ಪತ್ತು, ಇಪ್ಪತ್ತೈದು, ಐವತ್ತು, ಒಂದು ರೂ.ಗಳೆಲ್ಲ ಭಿನ್ನ ಭಿನ್ನವಾಗಿದ್ದವು. ಅಂಧರು ಕೂಡ ಕೇವಲ ಸ್ಪರ್ಶದಿಂದಲೇ ಆ ನಾಣ್ಯಗಳ ಮೌಲ್ಯವನ್ನು ಅಂದಾಜಿಸಬಹುದಾದಷ್ಟು ವ್ಯವಸ್ಥೆ ನಿಸೂರಾಗಿತ್ತು.
ಹೀಗೂ ತರ್ಕಿಸಬಹುದು. ದೇಶದಲ್ಲಿ ದೀರ್ಘಕಾಲ ಆಡಳಿತ ಮಾಡಿದ ಹಿಂದಿನ ಕಾಂಗ್ರೆಸ್ ಸರ್ಕಾರ ಹತ್ತು ಹಲವು ತಪ್ಪುಗಳನ್ನು ಮಾಡಿದೆ. ಅದಕ್ಕಾಗಿಯೇ ಈಗ ವಾನಪ್ರಸ್ಥವನ್ನೂ ಅನುಭವಿಸುತ್ತಿದೆ. ಅದು ಬಿಡಿ, ಬರೋಬ್ಬರಿ ಅರ್ಧ ಶತಮಾನದ ಆಡಳಿತದಲ್ಲಿ ಅದು ಕೆಲವು ಸರಿಗಳನ್ನೂ ಮಾಡಿದೆ. ಅಂತಹ ಸರಿಗಳನ್ನಾದರೂ ಈಗಿನ ಸರ್ಕಾರ ಅನುಸರಿಸಬೇಕಲ್ಲವೇ? ಅಂತಹವುಗಳಲ್ಲಿ ಒಂದು ಈ ನಾಣ್ಯದ ಆಕಾರ!
ಕೆಲವರಿಗೊಂದು ರೋಗವಿದೆ. ನಾನು ಈ ಸರ್ಕಾರವನ್ನು ಅಭಿಮಾನದಿಂದ ನೋಡುತ್ತೇನೆ ಎಂದರೆ ಅದರ ಎಲ್ಲ ನಡೆಗಳನ್ನು ಸಮರ್ಥಿಸುವುದು! ಅವರು ಹೇಳಬಹುದು, ನಾಣ್ಯಗಳ ಭಿನ್ನ ಭಿನ್ನ ಆಕಾರ ಎಂದರೆ ಸರ್ಕಾರಕ್ಕೆ ಅದರ ತಯಾರಿಕೆಗೆ ಹೆಚ್ಚು ವೆಚ್ಚ ಬೀಳುತ್ತದೆ. ಹಾಗಾಗಿ ಈಗಿನ ಸರ್ಕಾರ ಉಳಿತಾಯದ ದೃಷ್ಟಿಯಿಂದ ಹೀಗೆ ಮಾಡುತ್ತಿದೆ....
ವೇಸ್ಟೇಜ್, ಖರ್ಚು ಎಂಬುದು ಈ ಅಂಕಣಕಾರನಿಗಂತೂ ಗೊತ್ತಿಲ್ಲ. ಆದರೆ ಇವತ್ತಿನ ನಾಣ್ಯವನ್ನು ಹಿಂದಿನ ನಾಣ್ಯದ ಜೊತೆ ಇನ್ನೊಂದು ರೀತಿಯಲ್ಲಿ ಹೋಲಿಸಿ. ಆಗ ನಾಣ್ಯದ ಮುಖದಲ್ಲಿ ಅದರ ಮೌಲ್ಯವನ್ನು ಸಾಮಾನ್ಯ ನೋಟಕ್ಕೇ ಸಿಕ್ಕುವಂತೆ ದೊಡ್ಡದಾಗಿ ಉಬ್ಬು ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಅದರಿಂದ ಬ್ರೈಲ್ ಲಿಪಿ ಗೊತ್ತಿದ್ದವ ಕಣ್ಣು ಮುಚ್ಚಿಕೊಂಡು ನಾಣ್ಯದ ಮೌಲ್ಯ ಹೇಳಬಹುದಿತ್ತು. ಈಗ ನಾಣ್ಯದ ಮೌಲ್ಯದ ಮುದ್ರಣಕ್ಕಿಂತ ಬೇರೆ ಬೇರೆ ವಿವರಗಳೇ ಹೆಚ್ಚಿರುತ್ತವೆ. 75ನೇ ಸ್ವಾತಂತ್ರ್ಯೋತ್ಸವದ ಎಲ್ಲ ನಾಣ್ಯಗಳೂ ಸಮಸ್ಯೆಯನ್ನೇ ತಂದೊಡ್ಡುವಂತಿವೆ. ವಾದಕ್ಕಿರಲಿ ಅಂತ, ನಾಣ್ಯದಲ್ಲಿ ಈ ತರಹ ಇತರ ವಿಷಯಗಳನ್ನು ಮುದ್ರಿಸುವುದರಿಂದ ಜನಜಾಗೃತಿ ಆಗುತ್ತದೆ ಎಂಬ ಹೊಸ ವಾದ ಮಾತ್ರ ಬೇಡ!
10 ರೂ. ನಾಣ್ಯ ಚಲಾವಣೆಯಿಲ್ಲ ಎಂಬ ವದಂತಿ ಆ ನಾಣ್ಯವನ್ನು ಬ್ಯಾಂಕ್‌ಗಳೇ ಸ್ವೀಕರಿಸಲು ನಿರಾಕರಿಸುವಂತಹ ವಾತಾವರಣ ಸೃಷ್ಟಿಸಿತ್ತು. ಅಂದರೆ ಜನ ಧ್ವನಿ ಎತ್ತಿದರೆ ಅದಕ್ಕೊಂದು ಅಪರೂಪದ ಪ್ರಭಾವ ಇದೆ ಎಂಬುದು ಸ್ಪಷ್ಟ. ಚಿಲ್ಲರೆ ವಿಷಯ ಚಿಲ್ಲರೆಯಲ್ಲ. ಜನ ಈಗಿನ ನಾಣ್ಯಗಳ ಕುರಿತಾದ ಅಸಮಾಧಾನವನ್ನು ದೆಹಲಿ ದೊರೆಗಳಿಗೆ ಸಾಮಾಜಿಕ ಜಾಲತಾಣಗಳಿಂದ ಆರಂಭಿಸಿ ಎಲ್ಲ ವಿಧಾನಗಳಲ್ಲಿ ಮುಟ್ಟಿಸಬೇಕು. ಆದೀತಾ?
[‘ನಂ ಸಮಾಚಾರ’ ಸಾಗರದಿಂದ ಪ್ರಕಟಗೊಳ್ಳುತ್ತಿರುವ ಪಾಕ್ಷಿಕ ಪತ್ರಿಕೆ. ಸಾಗರದಲ್ಲಿರುವವರಲ್ಲದೆ ಸಾಗರ, ಶಿವಮೊಗ್ಗದಿಂದ ಆಚೆ ಇರುವ ಶಿವಮೊಗ್ಗ ಜಿಲ್ಲೆಯವರು, ಅಷ್ಟೇ ಅಲ್ಲ; ಸಾಗರದ ಯಾವ ಸಂಪರ್ಕ ಇಲ್ಲದವರಿಗೂ ಖುಷಿ ಕೊಡುವಂತೆ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ಆಸಕ್ತರಿಗೆ ಸ್ಯಾಂಪಲ್ ಸಂಚಿಕೆಯನ್ನು ಪೋಸ್ಟ್ ಅಥವಾ ಪಿಡಿಎಫ್ ಮೂಲಕ ಕಳುಹಿಸುತ್ತೇವೆ. ಆಸಕ್ತಿ ಇದ್ದರೆ ಚಂದಾದಾರರಾಗಬಹುದು. ಚಂದಾದಾರರ ಬಲ ಇದ್ದರೆ ನಾವು ಹೆಚ್ಚು ನಿರ್ಭಿಡೆಯಿಂದ ಸತ್ಯಗಳನ್ನು ಬರೆಯಬಹುದು. ಈಗ ಮೇಲೆ ಓದಿರುವಂತಹ ಬರಹಗಳು, ಚಿಂತನೆಗಳು, ಪುಟ್ಟ ಸ್ನಿಪೆಟ್ಸ್... ತುಂಬಾ ಇವೆ. ಒಮ್ಮೆ ಟ್ರೈ ಮಾಡಿ. ಸಂಪರ್ಕಕ್ಕೆ: 9886407592]

Address

RP Road
Sagar
577401

Opening Hours

Monday 7am - 9pm
Tuesday 7am - 9pm
Wednesday 7am - 9pm
Thursday 7am - 9pm
Friday 7am - 9pm
Saturday 7am - 9pm
Sunday 7am - 9pm

Telephone

+918183229933

Alerts

Be the first to know and let us send you an email when Suvidha Namma Super Market posts news and promotions. Your email address will not be used for any other purpose, and you can unsubscribe at any time.

Contact The Business

Send a message to Suvidha Namma Super Market:

Share